ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ... ಜಯಂತ ಕಾಯ್ಕಿಣಿ ಬರೆದ ಹಾಡನ್ನು ಗುನುಗುತ್ತಾ ಗೆಳತಿಯ ಬರುವಿಕೆಗೆ ಕಾಯುತ್ತಾ ಕುಳಿತಿದ್ದೆ .... ಒಮ್ಮೆ ಗೆಳತಿ ಬಂದೊಡನೆ ಕಸ್ಕ್ ಅಂತ ನಕ್ಕು ಸುಮ್ಮನಾದನಾನು, ಅವಳ ತುಟಿಯಲ್ಲಿ ಮೂಡಿದ ನಗು ಗಮನಿಸಿ.... ನಗುವ ನಯನ ಮಧುರ ಮೌನ.... ಎಂದು ಗುನುಗಿದ ಕೂಡಲೇ ಅವಳ ಕಣ್ಣಂಚಿನಲ್ಲಿ ಬೆಳಕು ಸರಿದಾಡಿದಂತೆ ಭಾಸವಾಗಿ ಅವಳನ್ನೇ ಗಮನಿಸಿದಾಗ - ನಡುಗುತ್ತಿರುವ ಮೈ ಮನ, ಕದಲುತ್ತಿರುವ ಕೂದಲನ್ನು ನೋಡಿ ಏನೋ ವಿಚಿತ್ರ, ಏನೋ ತಲ್ಲಣ, ಯಾಕೋ ಮೌನ ಮನೆ ಮಾಡಿದಂತಾಗಿ, ಭೂಮಿಯ ಜೊತೆ ದೇಹವು ಕಂಪಿಸಿ, ಮಾತನಾಡಲು ಮುಂದಾದ ನಾನು ಸುಮ್ಮನಾದೆ. ಅವಳು ನನ್ನ ಕೈ ಹಿಡಿದು ನನ್ನನು ಮರೆತು ಬಿಡು ಎಂದಾಗ ಮಾತು ಬತ್ತಿ ಹೋಗಿ , ಬರಸಿಡಿಲು ಬಡಿದು, ಕಾರ್ಮೋಡ ಕವಿದು, ತುಂತುರು ಮಳೆ ಹನಿದು, ಕಣ್ಣೀರ ಮರೆ ಮಾಚಿತು. ಅವಳು, ಕಾರಣ ಕೇಳುವ ಮುಂಚೆ ಕಣ್ಮರೆಯಾದಳು.
ಮುಂಜಾವಿನ ಕಿರಣ ಕಣ್ಣ ಸೋಕುವ ಮುನ್ನ ರಾತ್ರಿಯ ತುಂಟಾಟ ನೆನೆದು ನಿದ್ರೆಗೆ ಜಾರುವ ಮುನ್ನ ಸಂಜೆ ಹೊತ್ತಲ್ಲಿ ಗೆಳತಿಯ ಕೈ ಹಿಡಿದು ತಂಗಾಳಿ ಮೈ ಸೋಕುವ ಮುನ್ನ ಉರಿ ಬಿಸಿಲ ಲೆಕ್ಕಿಸದೆ ಜಗಳವಾಡುವ ಮುನ್ನ ಸಂಪರ್ಕಿಸಲು ಪಟ್ಟ ಪಾಡ ಗೆಳತಿಗೆ ತಿಳಿಸುವ ಮುನ್ನ ಅಪ್ಪನ ಜೇಬಿಗೆ ಕೈ ಬಿಟ್ಟು, ಯಮಹ ಬೈಕ್ ಸ್ಟಾರ್ಟ್ ಮಾಡುವ ಮುನ್ನ ಅಮ್ಮ ಮಾಡಿದ ಚಿತ್ರಾನ್ನ ತಿನ್ನುವ ಮುನ್ನ ಹಾಸಿಗೆಯಿಂದ ಮೇಲೆದ್ದು ಬಿಸಿ ನೀರು ಮೈ ತಾಕುವ ಮುನ್ನ ಮುಂಜಾವಿನ ಕಿರಣ ಕಣ್ಣ ಸೋಕುವ ಮುನ್ನ.................
|
ಉತ್ತರ ಸಿಗದ....... ಕಾಮನಬಿಲ್ಲ ಕಾಲ್ ಗೆಜ್ಜೆ ಮಾಡಿ, ಗೆಳತಿಯ ಕಾಲಿಗೆ ಕಟ್ಟಿ ಅವಳ ನಡಿಗೆಯ ನೋಡಿ,ವರ್ಣಿಸಿ,ಆನಂದಿಸಿ ಕವಿತೆ ಬರೆಯುವ ಮುನ್ನ ಪದಗಳ ನರ್ತನದ ಜೊತೆ ಮೈ ಮರೆತು, ಲೇಖನಿ ಹಿಡಿದು ರವಿ ಕೂಡ ನಚ್ಚುವ ಹಾಗೇ ಕವಿ ಕೂಡ ಬೆರಗಾಗುವ ಹಾಗೇ ..... ಕವಿತೆ ಬರೆಯುವ ಪ್ರಯತ್ನ ನನ್ನದು......
...ಪ್ರತಿ ಬಾರಿ ಸೋಲುವ ನಾನು... ಪ್ರೀತಿಗೋ ಅಥವಾ ಪದೇ ಪದೇ ಕಾಡುವ ಕಾಲ್ ಗೆಜ್ಜೆಗೋ.......
ನನ್ನ ಬಗ್ಗೆ ,,,, ನಾನೇ ಹೇಳಿದು, ನೀವು ಕೇಳಿದು..ಕೇಳಬೇಕಾದ್ದು...
ರಾಮ್ ನಾಗೇಶ್
bengaluru, karnataka, India
ಸಿನಿಮಾ ಹಾಗೂ ನಾಟಕದ ಹುಚ್ಚು. ಸ್ವಲ್ಪ ಬರೆಯುವ, ಪೂರ್ತಿ ಓದುವ ಹುಡುಗ. Media firm ನಲ್ಲಿ ಕೆಲಸ.
ಒಟ್ಟು ಸಾವಿರದ ಏಂಟುನೊರು ಸಿನಿಮಾ ವೀಕ್ಷಣೆ.
ನೋಡಿದ್ದೆ ಪೊನ್ಃ ಪೊನ್ಃ ನೋಡುವ ಆಸೆ...
ಸಿನಿಮಾ ಎಂದರೆ ಪ್ರಾಣ.. Born to Cinema, Lives to Cinema...